ಸಿದ್ದತೆ ಏನು

ಗೆಳೆಯ ಬಾಳಿನ ಅಂಗಳಕ್ಕೆ ಬಂದೆ
ಇದೇ ಶಾಶ್ವತವೆಂದು ನೀನು ತಿಳಿದೆ
ಹೊನ್ನು ಮಣ್ಣಿನಾಸೆಯಲಿ ಬೆರೆತೆ
ನನ್ನದೆಂಬ ಅಹಂದಲಿ ನಿ ಉಳಿದೆ

ನೀನು ಈ ಭವದಿ ಹೋಗುವುದು ಸತ್ಯ
ಅದರ ಬಗ್ಗೆ ನಿನಗಿರಲಿ ಚಿಂತನೆ ನಿತ್ಯ
ನಿನ್ನೊಂದಿಗೆ ಯಾರು ಅಲ್ಲಿ ಬರುವದಿಲ್ಲ
ಮಾಡಿಕೊಳ್ಳದಿರು ಬಾಳು ಸ್ವಾರ್ಥದಿ ಹತ್ಯೆ

ನೀನು ಮಾಡಿದ ಕರ್ಮ ಹೋಗಲಿದೆ ಅಲ್ಲಿ
ನೀನು ಸಂಚಯಿಸಿದ ಸಿರಿ ಇರುವುದು ಇಲ್ಲಿ
ನಾಳಿನ ಸಾರ್ಥಕತೆಗೆ ಇಂದು ಮಾಡಿದ್ದೇನು!
ಇಲ್ಲದಿರೆ ಮತ್ತೆ ಬದುಕಿನಾಚೆಗಿನ ಸಿದ್ಧತೆ ಏನು

ನಿನ್ನ ತನು ಮನದಲಿ ತುಂಬಿಕೊಳ್ಳಲಿ ಭಕ್ತಿ
ಹರಿಯ ಚಿಂತನೆ ಮಾತ್ರ ನಿರಂತರ ಸಾಗಲಿ
ನಿನ್ನ ಪಾಪಗಳೆಲ್ಲ ತಾನೇ ತೊಳೆದು ಹೋಗಲಿ
ಮಾಣಿಕ್ಯ ವಿಠಲನ ಬಾಳು ಭವ್ಯವಾಗಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಇಳಿದು ಬಾ ಮಳೆರಾಯ
Next post ಜಾನಪದದಲ್ಲಿ ಮಾನವೀಯ ಮೌಲ್ಯಗಳು

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys